Posts

Cause of Kannada Language and Sanatana Dharma should be Coordinated Together

Cause of Kannada Language and  Sanatana Dharma should be Coordinated Together Nowadays there are two groups in Karnataka which are fighting for opposing Ideologies. One Group is a Pro-Kannada Group and another a Pro-Hindu The Kannada group says Kannada is God, Kannada is Caste, Kannada is Dharma or Religion and is fighting against Hindi Imposition in Namma Metro, Banks and other Central Government institutions.  The Hindu Group is fighting for the Hindu Rights and discrimination of the current Congress government against Hindus especially in the recent  Communal Killings in the Coast District of Mangaluru where RSS Activists are killed by  Islamist organizations which are brewing in the Coastal region bordering Kerala. Most of the Islamists in Coastal Karnataka are influenced by the Islamist ideology of the Kerala Communists especially Communal killings of RSS activists in Kerala’s Kannur district by Islamic Criminals. group.  Both the Kannada group and ...

ಕನ್ನಡ ಚಿತ್ರರಂಗಕ್ಕೆ ನಿಯಮಿತ ಡಬ್ಬಿಂಗ್ ನಿಂದ ಪ್ರಯೋಜನವಿದೆ - ಒಂದು ಅವಲೋಕನ

ಕನ್ನಡ ಚಿತ್ರರಂಗಕ್ಕೆ ನಿಯಮಿತ ಡಬ್ಬಿಂಗ್ ನಿಂದ ಪ್ರಯೋಜನವಿದೆ - ಒಂದು ಅವಲೋಕನ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಜಿ.ವಿ ಯವರು ಡಬ್ಬಿಂಗ್ ನಿಜವಾದ ಕಲೆಯಲ್ಲ, ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಅವಶ್ಯವಿಲ್ಲವೆಂದು ಹೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಈಗ ನಿಯಮಿತ ಡಬ್ಬಿಂಗ್ ಯಾಕೆ ಬೇಕು ಎಂಬುದರ ಬಗ್ಗೆ ಒಂದು ಅವಲೋಕನ ಈ ಲೇಖನ. ಚಲನಚಿತ್ರ ಅಥವಾ ದಾರಾವಾಹಿಗಳನ್ನು ಮೂಲದ ಭಾಷೆಯಿಂದ ಮತ್ತೊಂದು ಭಾಷೆಗೆ, ಕಲಾವಿದರ ದ್ವನಿಯನ್ನು ಮರುಮುದ್ರಿಸುವುದನ್ನು ಡಬ್ಬಿಂಗ್ ಎಂದು ಕರೆಯುವುದು ವಾಡಿಕೆ. ಈ ಪ್ರಕ್ರಿಯೆಯಲ್ಲಿ ಮೂಲ ಕಲಾವಿದರ ಕಂಠದಲ್ಲೇ ಡಬ್ಬಿಂಗ್ ಮಾಡಬಹುದು ಅಥವಾ ಮೂಲ ಕಲಾವಿದರಿಗೆ ಡಬ್ಬಿಂಗ್ ಮಾಡುತ್ತಿರುವ ಭಾಷೆಯಲ್ಲಿ ಕುಶಲತೆ ಇಲ್ಲದಿದ್ದರೆ ಅಂತಹ ಕಲಾವಿದರಿಗೆ ಕಂಠದಾನ ಕಲಾವಿದರ ದ್ವನಿಯನ್ನು ಡಬ್ ಮಾಡಬಹುದು. ಈ ರೀತಿ ಒಂದು ಭಾಷೆಯಲ್ಲಿ ತಯಾರಿಸಿದ ಚಲನಚಿತ್ರಗಳನ್ನು, ದಾರಾವಾಹಿಗಳನ್ನು ಮತ್ತೊಂದು ಭಾಷೆಗೆ ಸುಲಭವಾಗಿ ಡಬ್ ಮಾಡಬಹುದು. ಕನ್ನಡ ಚಿತ್ರರಂಗ ಮತ್ತು ಡಬ್ಬಿಂಗ್ ಇತಿಹಾಸ ಕನ್ನಡ ಚಿತ್ರರಂಗದ ಪ್ರಾರಂಭದ ದಿನಗಳು ಡಬ್ಬಿಂಗ ಚಿತ್ರಗಳ ಕಾಲ ಎಂದರೆ ತಪ್ಪಲ್ಲ. ೪ಂ-೫೦ರ ದಶಕದಲ್ಲಿ, ಜನಪ್ರಿಯವಾದ ತಮಿಳು ಹಾಗೂ ತೆಲುಗು ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಕರ್ನಾಟಕದಲ್ಲಿ ಪ್ರದರ್ಶಿಸುತ್ತಿದ್ದರು. ಆಗಿನ್ನೂ ಕನ್ನಡ ಚಿತ್ರರಂಗಕ್ಕೆ ಕರ್ನಾಟಕದಲ್ಲಿ ಒಂದು ಸ್ವಂ...

ಕನ್ನಡ ನಾಡಿನ ಸೌಂದರ್ಯ - ಸಂಗೀತ ದೃಶ್ಯಾವಳಿ

Image

ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಕೆಲವು ಪತ್ರಗಳು

Image

ಬ್ಯಾಂಗಲೋರ್ ಬೆಂಗಳೂರು ಎಂದು ಬೇಗ ಆಗಲಿ

Image

ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ಮತ್ತು ಕನ್ನಡದ ಸಮಸ್ಯೆಗಳು - ಒಂದು ವಿಶ್ಲೇಷಣೆ

Image
ಕನ್ನಡಿಗರು ಅದರಲ್ಲೂ ಬೆಂಗಳೂರು, ಮೈಸೂರು ಕಡೆಯವರು ಬಲು ಸೋಮಾರಿಗಳು. ಮನೆ ಕಟ್ಟುವ ಕೂಲಿ ಕೆಲಸ, ಕಾರ್ಪೆಂಟರ್, ಪ್ಲಂಬಿಂಗ್, ತರಕಾರಿ ಮಾರುವ ಕೆಲಸ, ಮನೆಗೆಲಸ ಮತ್ತು ನಗರಪಾಲಿಕೆಯ ಪೌರಕಾಮಿಕರ ಕೆಲಸ ಮುಂತಾದ ಯಾವುದೇ ಶ್ರಮದ ಕೆಲಸಗಳಿಗೆ ಅವರು ಮುಂದೆ ಬರುವುದಿಲ್ಲ ಎಂದು ಕನ್ನಡಿಗರೇ ಗೊಣಗುವುದನ್ನು ನಾವು ಬಹಳ ಸಲ ಕೇಳಿದ್ದೇವೆ. ತಮಿಳರು, ತೆಲುಗರು, ಮಲಯಾಳಿಗಳು, ಮತ್ತು ಈಗೀಗ ಉತ್ತರಭಾರತೀಯರು ಈ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದನ್ನು ನಾವು ಕಾಣುತ್ತೇವೆ. ಇಂತಹ ಕೆಲಸಗಳಿಗೆ ಕನ್ನಡಿಗರನ್ನು ಹುಡುಕಿದರೂ ಸಿಗದಂತಹ ಪರಿಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. ಯಾಕೆ ಹೀಗೆ? ನಮ್ಮ ಕನ್ನಡಿಗರು ಈ ಕೆಲಸಗಳಿಗೆ ಒಗ್ಗುವುದಿಲ್ಲವೇ? ನಿಜವಾಗಿಯೂ ಸೋಮಾರಿಗಳೇ? ಇದರ ಬಗ್ಗೆ ನಾನು ಬಹಳಷ್ಟು ವಿಚಾರಮಾಡಿದ್ದೇನೆ. ಬಹಳ ಜನರು ಗಮನಹರಿಸದ ಬಹುಮುಖ್ಯ ಸಂಗತಿ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂಬುದು ಈ ಲೇಖನ ಬರೆಯಲು ಶುರುಮಾಡಿದೆ. (ಚಿತ್ರ ೧.) ವಿವಿಧ ರಾಜ್ಯಗಳ ಜನಗಣತಿಯ ಅಂಕಿ‌ಅಂಶಗಳು ಮೇಲ್ಕಂಡ ಚಿತ್ರ ೧ ರಲ್ಲಿನ ಭಾರತದ ವಿವಿಧ ರಾಜ್ಯಗಳ ನಕ್ಷೆಗಳನ್ನು ಮತ್ತು ಮೇಲಿನ ಜನಗಣತಿಯ ಅಂಕಿ‌ಅಂಶಗಳನ್ನು ಗಮನಿಸಿದರೆ ಕೆಲವು ಸತ್ಯ ಸಂಗತಿಗಳು ನಮಗೆ ಗೋಚರಿಸುತ್ತವೆ. ವಿಸ್ತಾರದಲ್ಲಿ ಕರ್ನಾಟಕ ರಾಜ್ಯಕ್ಕಿಂತ ಚಿಕ್ಕದಾಗಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿನ ಜನದಟ್ಟನೆ ನಮ್ಮ ರಾಜ್ಯಕ್...

ಕನ್ನಡಿಗನ ಆದ್ಯ ಕರ್ತವ್ಯಗಳು

ಕನ್ನಡಿಗರಾದ ನಾವು ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಲು ನಮ್ಮ ಪರಿಸರದಲ್ಲಿ, ದಿನನಿತ್ಯದ ವ್ಯವಹಾರಗಳಲ್ಲಿ ವೈಯಕ್ತಿಕವಾಗಿ ಮಾಡಬಹುದಾದ(ಮಾಡಲೇಬೇಕಾದ) ಕೆಲವು ಕನ್ನಡ ಪರ ಕೆಲಸಗಳ ಪಟ್ಟಿ. ಈ ಕೆಲಸಗಳನ್ನು ಮಾಡಲು ಯಾವ ಸಂಘಟನೆಯೂ ಬೇಕಿಲ್ಲ. ಪ್ರತಿಯೊಬ್ಬ ಕನ್ನಡಿಗನೂ ಮನಸ್ಸು ಮಾಡಿದರೆ ಸುಲಭವಾಗಿ ಮಾಡಬಹುದು. ೧. ತಮ್ಮ ಸ್ನೇಹಿತರ ಜೊತೆ, ಸಾರ್ವಜನಿಕರ ಜೊತೆ ಅವರು ಯಾವುದೇ ಭಾಷಿಕರಾಗಿರಲಿ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸುವುದು. ಟಿಪ್ಪಣಿ: ಬ್ಯಾಂಕುಗಳಲ್ಲಿ ವ್ಯವಹರಿಸುವಾಗ(ಚೆಕ್ಕು, ಚಲನ್‌ಗಳನ್ನು ಕನ್ನಡದಲ್ಲೇ ಬರೆಯಿರಿ), ಬಸ್ಸು/ರೈಲುಗಳ ಖಾದಿರುಸುವಿಕೆ ಮಾಡುವಾಗ, ಸಾರ್ವಜನಿಕವಾಗಿ ಕರ್ನಾಟಕದಲ್ಲಿ ಎಲ್ಲೇ ವ್ಯವಹಾರ ಮಾಡುವಾಗ ಕನ್ನಡ ಬರವಣಿಗೆ ಉಪಯೋಗಿಸಿ, ಸಿಬ್ಬಂದಿಗಳ ಜೊತೆ ಕನ್ನಡದಲ್ಲೇ ಮಾತನಾಡಿ. ಯಾರೇ ಮನೆಗೆ ದೂರವಾಣಿ ಕರೆ/ಸಂಚಾರಿ(ಮೋಬೈಲ್) ಕರೆ ಮಾಡಿದರೂ ಕನ್ನಡದಲ್ಲೇ ಮಾತನಾಡಿ. ಹೀಗೆ ಪರಭಾಷಿಕರು ಕನ್ನಡ ಕಲಿಯಲೇ ಬೇಕಾದ ಅನಿವಾರ್ಯತೆ ಸೃಷ್ಟಿಮಾಡಿ. ೨. ತಮ್ಮ ಮನೆಯಲ್ಲಿ ಕನ್ನಡದ ಒಂದು ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳನ್ನು ಕೊಂಡು ಓದುವುದು ಟಿಪ್ಪಣಿ: ಬಹುಪಾಲು ಕನ್ನಡಿಗರ ಮನೆಗಳಲ್ಲಿ, ಅದರಲ್ಲೂ ಪಟ್ಟಣ ಪ್ರದೇಶಗಳಲ್ಲಿ ಆಂಗ್ಲ ಪತ್ರಿಕೆಗಳನ್ನು ತರಿಸುತ್ತಾರೆ. ಇದರಿಂದ ಕನ್ನಡದ ಸುದ್ದಿಗಳು ಕನ್ನಡಿಗರಿಗೆ ತಿಳಿಯುವುದಿಲ್ಲ, ಏಕೆಂದರೆ ಕನ್ನಡ ಪರ ಸುದ್ದಿಗಳು ಆಂಗ್ಲ ಪತ್ರಿಕೆಗಳಲ್ಲಿ ಬರುವುದಿಲ್ಲ. ಈಗಾಗಲೆ ಆಂ...