Posts

Showing posts with the label Kannada Nadu

ಕನ್ನಡ ನಾಡಿನ ಐತಿಹಾಸಿಕ ವಿಸ್ತಾರ

ಕಾವೇರಿಯಿಂದಮಾ ಗೋದಾವರಿ ವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು ಧಾವಲಯ ವಿಲೀನ ವಿಶದ ವಿಷಯ ವಿಶೇಷಂ|| ಕನ್ನಡದಲ್ಲಿ ಈಗ ಲಭ್ಯವಿರುವ ಮೊದಲ ಗ್ರಂಥವಾದ “ಕವಿರಾಜಮಾರ್ಗ” ದಲ್ಲಿನ ಈ ನುಡಿಗಳು ಕನ್ನಡ ನಾಡಿನ ಐತಿಹಾಸಿಕ ವಿಸ್ತಾರವನ್ನು ಸ್ಥೂಲವಾಗಿ ತಿಳಿಸುತ್ತದೆ. ಕನ್ನಡ ಭಾಷಿಕರು ನೆಲೆಸಿದ ಪ್ರದೇಶ, ದಕ್ಷಿಣದ ಕಾವೇರಿ ನದಿಯಿಂದ ಉತ್ತರದ ಗೋದಾವರಿ ನದಿಯವರೆಗೆ ವ್ಯಾಪಿಸಿತ್ತು ಎಂದು ಇದರಿಂದ ತಿಳಿದುಬರುತ್ತದೆ. ಅಂದರೆ ಕಾವೇರಿಯ ದಕ್ಷಿಣಕ್ಕೆ ಹಾಗೂ ಗೋದಾವರಿಯ ಉತ್ತರಕ್ಕೆ ಕನ್ನಡ ಪ್ರದೇಶಗಳು ಇರಲಿಲ್ಲವೆಂದಲ್ಲ. ಮೊದಲು ನಾವು ದಕ್ಷಿಣದ ಕನ್ನಡ ಪ್ರದೇಶಗಳ ಕಡೆಗೆ ಗಮನಹರಿಸೋಣ ಬನ್ನಿ. ಈಗ ತಮಿಳುನಾಡು ರಾಜ್ಯದಲ್ಲಿ ಸೇರಿಹೋಗಿರುವ ಈರೋಡು, ಕೃಷ್ಣಗಿರಿ, ಧರ್ಮಪುರಿ ಹಾಗೂ ಸೇಲಂ ಜಿಲ್ಲೆಗಳು ಐತಿಹಾಸಿಕವಾಗಿ ಅಚ್ಚ ಕನ್ನಡ ಪ್ರದೇಶಗಳಾಗಿದ್ದವು. ತಲಕಾಡಿನ ಗಂಗರು ಹಾಗೂ ಬಾಣರಸರು ಈ ಪ್ರದೇಶಗಳನ್ನು ಆಳಿದ ಕನ್ನಡ ರಾಜಮನೆತನಗಳು. ಈ ಜಿಲ್ಲೆಗಳಲ್ಲಿ ದೊರಕಿರುವ ಹೆಚ್ಚಿನ ಶಾಸನಗಳು ತಲಕಾಡಿನ ಗಂಗರಸರ ಕನ್ನಡ ಶಾಸನಗಳು. ಈ ಭಾಗದ ಹಳ್ಳಿಗಳು, ಪಟ್ಟಣಗಳು ಈಗಲೂ ಕನ್ನಡದ ಹೆಸರನ್ನು ಹೊಂದಿವೆ. ಉದಾಹರಣೆಗೆ ಬೆಂಗಳೂರು ಗಡಿಗೆ ಹೊಂದಿಕೊಂಡಿರುವ ಹೊಸೂರು, ಡೆಂಕಣಿಕೋಟೆ ಊರುಗಳ ಹೆಸರು ಕನ್ನಡದಲ್ಲಿವೆ. ಈಗಲೂ ಕೃಷ್ಣಗಿರಿ ಬಳಿ ಕನ್ನಡ ಹಳ್ಳಿ ಎಂದು ಹೆಸರಿರುವ ಒಂದು ಹಳ್ಳಿಯಿದೆ! ಧರ್ಮಪುರಿ ಬಳಿಯಿರುವ ಕಾವೇರಿಯ ಜಲಪಾತದ ಹೆಸರು ಹೊಗೇನಕಲ್! ಕನ್ನಡ ಪದವಾ...